Wednesday 11 August, 2010

ಸಾರ್ಥಕತೆ

ಕವನದ ಹಂಗೇಕೆ ನನಗೆ
ಬರೆವ ಪ್ರತಿ ಪದವು ನಿನ್ನ
ಸೇರುತಿರಲು..

ಹಾಳೆ ತುಂಬವ ಗೋಜೇಕೆ ಎನಗೆ
ಎರಡಕ್ಷರದಲ್ಲೇ ಭಾವವೆಲ್ಲ
ಬಸಿದಿರಲು..

ಹಾಡು ಹಾಡುವ ತವಕವೇಕೆ ಈಗ
ನಿನ್ನುಸಿರೆ ನನ್ನೆದೆಯಲ್ಲಿ
ರಾಗವಾಗಿರಲು..

ವಿರಹದ ನೋವೇಕೆ ನೆನಪಿಗೆ  
ಮನದಲ್ಲಿ ಅನುರಾಗವೇ
ತುಂಬಿರಲು..