ದಕ್ಕದೇ ಕಳೆದು ಹೋದ ಇವಿಷ್ಟು ದಿನಗಳಲ್ಲಿ
ಬದುಕೆಂಬ ಬಂಡಿ ಅಲೆದದ್ದು ಎಲ್ಲೆಲ್ಲಿ
ನಡೆದದ್ದಾಯ್ತು ಅದರ ಸಾಹೇಬನ ಅಂಕೆಯಲ್ಲಿ
ಸೋತ ನಂತರ ಮೀರಬೇಕೆಂಬ ಪ್ರಯತ್ನದಲ್ಲಿ
ಮೂಡುತ್ತಿತ್ತು ಹಲವು ಕನಸು ಮನದಲ್ಲಿ
ವಾಸ್ತವ ಪ್ರಶ್ನೆಯಾಗಿ ಕೂಡುತ್ತಿತ್ತು ಕಣ್ಣಲ್ಲಿ
ನನಸಲೇ ಬೇಕೆಂಬ ಹಠ ಸರಿಯಿತಲ್ಲಿ
ಉತ್ತರ ಹುಡುಕಲೇ ಬೇಕಾದ ಅನಿವಾರ್ಯದಲ್ಲಿ
ಇಂತಹ ಆತ್ಮ ಹತ್ಯೆಗಳಿಗೆ ಕೊನೆಯಲ್ಲಿ ?